Loading Now

ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದ ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ..!

ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದ ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ..!

ಸ್ಪಷ್ಟವಾದ ಕನ್ನಡದಲ್ಲಿ ನಿರೂಪಣೆ ಮಾಡಿದ ಕನ್ನಡಿಗರ ಅಪರ್ಣಾ ಈಗ ನಮ್ಮೊಂದಿಗಿಲ್ಲ.  ಕೆಲವು ದಿನಗಳ ಹಿಂದೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣಾ ಅವರನ್ನು ಆಸ್ಪತ್ರೆಗೆ ಮೂರು ದಿನಗಳ ಹಿಂದೆ ಕರೆತರಲಾಗಿತ್ತು.   ವೈದ್ಯಕೀಯ ಚಿಕಿತ್ಸೆ ಫಲಕಾರಿಯಾಗದೆ  ಅವರು ಕೊನೆಯುಸಿರೆಳೆದಿದ್ದಾರೆ.  ಇಂದು ಸಂಜೆ ಅವರ  ಮನೆಯಲ್ಲಿ ಅಪರ್ಣಾ ನಿಧನರಾದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣಾ ಇತ್ತೀಚಿಗೆ ಕುಸಿದು ಬಿದ್ದು ಗಾಯವಾಗಿ ಆಸ್ಪತ್ರೆಗೆ ಸೇರಿದ್ದರು ಆದ್ದರಿಂದ ಅವರು ಹಲವಾರು ದಿನಗಳ ವಿಶ್ರಾಂತಿ ತೆಗೆದುಕೊಂಡರು.  ಅಪರ್ಣಾ ಅವರ ಅಗಲಿಕೆ ಕನ್ನಡಿಗರಿಗೆ ತೀವ್ರ ನೋವುಂಟು ಮಾಡಿದೆ.  ಚಲನಚಿತ್ರ, ದೂರದರ್ಶನ ಮತ್ತು ಸಾಹಿತ್ಯ ಉದ್ಯಮದ ಹಲವಾರು ಪ್ರಸಿದ್ಧ ವ್ಯಕ್ತಿಗಳು ಅಪರ್ಣಾ ಅವರ ನಿಧನದ ಬಗ್ಗೆ ತಮ್ಮ ಆಘಾತವನ್ನು ವ್ಯಕ್ತಪಡಿಸಿದ್ದಾರೆ.

ಕನ್ನಡದಲ್ಲಿ namma metro “ಮೆಟ್ರೋ ವಾಯ್ಸ್” ಗೆ ಅಪರ್ಣಾ ಅವರ ಕೊಡುಗೆಯು ವಾಯ್ಸ್‌ಓವರ್‌ಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ಇವರು ಚೆನ್ನೈಗೆ ಹೋಗಿ ವಾಯ್ಸ್ ಓವರ್ ನೀಡಿ ಹತ್ತು ಹನ್ನೆರಡು ವರ್ಷಗಳ ಬಳಿಕ ನಮ್ಮ ಮೆಟ್ರೋ ಬೆಂಗಳೂರಿನಲ್ಲಿ ಚಲಾವಣೆ ಆಗಿದ್ದು ಹಾಗೂ ಸಾಮಾಜಿಕ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಭಾಗಗಳನ್ನು ನಿರೂಪನೆ ಮಾಡುವಲ್ಲಿ ಅವರ ಪಾತ್ರ ವಿಶೇಷ, ಅಂತಹ ಕೊಡುಗೆಗಳು ತನ್ನ ನಿರೂಪನೆ ಕೌಶಲ್ಯಗಳ ಮೂಲಕ ವೀಕ್ಷಕರನ್ನು ತೊಡಗಿಸಿಕೊಳ್ಳುವ ಅವರ ಸಾಮರ್ಥ್ಯವನ್ನು ಮತ್ತು ಕಾರ್ಯಕ್ರಮದ ವಿಷಯ ಮತ್ತು ಪ್ರೇಕ್ಷಕರನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತವೆ.  ದೂರದರ್ಶನದಲ್ಲಿನ ವಾಯ್ಸ್‌ಓವರ್‌ಗಳು, ವಿಶೇಷವಾಗಿ “ಮೆಟ್ರೋ ವಾಯ್ಸ್” ನಂತಹ ಕಾರ್ಯಕ್ರಮಗಳಲ್ಲಿ, ಪ್ರೇಕ್ಷಕರಿಗೆ ಪರಿಣಾಮಕಾರಿಯಾಗಿ ಮಾಹಿತಿಯನ್ನು ತಲುಪಿಸಲು ಸ್ಪಷ್ಟವಾದ ಕನ್ನಡದಲ್ಲಿ ತಮ್ಮದೇ ಶೈಲಿಯಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು.

Spread the informaton

Post Comment

You cannot copy content of this page