ಆರ್ ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಈಶ್ವರ ಖಂಡ್ರೆ.
ಬೀದರ : ದೇಶದಲ್ಲಿ ಕಾಂಗ್ರೆಸ್ ಅಲೆ ಇಲ್ಲ, ಸುನಾಮಿ ಶುರುವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಈಶ್ವರ ಖಂಡ್ರೆ.
“ತೆಲಂಗಾಣದಲ್ಲಿ ಬಿ ಆರ್ ಎಸ್, ರಾಜಸ್ಥಾನದಲ್ಲಿ ಬಿಜೆಪಿ, ಸೇರಿ ಎಲ್ಲಾ ಪಕ್ಷಗಳು ಧೂಳಿಪಟ ಆಗಲಿವೆ.ಪಂಚ ರಾಜ್ಯಗಳ ಚುನಾವಣೆ ಲೋಕಸಭೆ ಚುನಾವಣೆ ದಿಕ್ಸೂಚಿ ಆಗಲಿದೆ ಅರಣ್ಯ ಮತ್ತು ಜೈವಿಕ ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಬೀದರ್ ನಲ್ಲಿ ಹೇಳಿಕೆ.ಐದು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ.ಕರ್ನಾಟಕ ರಾಜ್ಯದಲ್ಲಿ ಕೊಟ್ಟಿರುವ ಗ್ಯಾರಂಟಿಯಿಂದ ಎಲ್ಲಾ ರಾಜ್ಯಗಳಲ್ಲಿ ಬದಲಾವಣೆ ಪ್ರಾರಂಭ ಆಗಿದೆ.ಕರ್ನಾಟಕದಲ್ಲಿ ಕೊಟ್ಟಿರುವ ಗ್ಯಾರಂಟಿಗಳ ಮಾದರಿಯಲ್ಲಿ ಎಲ್ಲಾ ರಾಜ್ಯಗಳಲ್ಲಿ ಗ್ಯಾರಂಟಿ ಅಳವಡಿಸಿಕೊಳ್ಳುತ್ತಿದ್ದಾರೆ.”
“ಆರ್ ಅಶೋಕ ವಿರುದ್ಧ ವಾಗ್ದಾಳಿ ನಡೆಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ.
ಅವರಿಗೆ ನೆಲೆ ಎಲ್ಲಿದೆ.ಅವರ ಪಕ್ಷದವರಿಗೆ ಅವರು ಇಟ್ಟುಕೊಳ್ಳಲು ಆಗುತ್ತಿಲ್ಲಾ.ಅವರ ಪಕ್ಷದವರೇ ಅವರ ಬಗ್ಗೆ ಅಪಸ್ವರ ಎತ್ತುತ್ತಾರೆ.ಅವರ ಬಗ್ಗೆನೇ ಟಿಕೆ ಟಿಪ್ಪಣಿ ಮಾಡುತ್ತಾರೆ.ಅವರ ಸರ್ಕಾರ ಇದ್ದಾಗ ನೂರು ಕೋಟಿ ರೂಪಾಯಿ ಕೊಟ್ಟು ಮಂತ್ರಿಯಾಗುತ್ತಾರೆ.ಮುಖ್ಯಮಂತ್ರಿ ಆಗೋದಕ್ಕೆ
2 ಸಾವಿರದ 500 ಕೋಟಿ ಕೊಡಬೇಕಾಗುತ್ತದೆ ಎನ್ನುವ ಮಾತನ್ನು ಹೇಳಿದರು.ಅವರ ಸರ್ಕಾರ ಇದ್ದಾಗ ಹಿರಿಯ ಸಚಿವರು ಇಷ್ಟೊಂದು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಅವರ ಶಾಸಕರೇ ಹೇಳಿದರು.”
“ಅದರ ಬಗ್ಗೆ ಮಾತನಾಡಲಿ ಎಂದು ಆರ್ ಅಶೋಕ್ ವಿರುದ್ಧ ಸಚಿವ ಈಶ್ವರ್ ಖಂಡ್ರೆ ವಾಗ್ದಾಳಿ ನಡೆಸಿದರು.ತನ್ನ ತಟ್ಟೆಯಲ್ಲಿ ಕತ್ತಿ ಬಿದ್ದಿದೆ ಬೇರೆಯವರ ತಟ್ಟೆಯಲ್ಲಿ ನೊಣ ಬಿದ್ದಿದ್ದು ನೋಡುವ ಅವಶ್ಯಕತೆ ಏನಿದೆ ” ಎಂದು ಆರ್ ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಈಶ್ವರ್ ಬಿ ಖಂಡ್ರೆ.
Post Comment